ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಗಳೂರು: ಜಪ್ಪು ಬಪ್ಪಾಲ್‌ನಲ್ಲಿ ಮದ್ರಸ ಕಟ್ಟಡ ಉದ್ಘಾಟನೆ

ಮಂಗಳೂರು: ಜಪ್ಪು ಬಪ್ಪಾಲ್‌ನಲ್ಲಿ ಮದ್ರಸ ಕಟ್ಟಡ ಉದ್ಘಾಟನೆ

Thu, 07 Jan 2010 02:59:00  Office Staff   S.O. News Service
ಮಂಗಳೂರು,ಜ.6:ಜಪ್ಪು ಬಪ್ಪಾಲ್‌ನ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದ್ರಸದ ಕಟ್ಟಡವನ್ನು ಮಂಗಳೂರು ಸಹಾಯಕ ಖಾಝಿ  ಅಲ್‌ಹಾಜ್ ಅಹ್ಮದ್ ಮುಸ್ಲಿಯಾರ್ ತೋಕ ಉದ್ಘಾಟಿಸಿದರು.

ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಯೆನಪೋಯ ಮುಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಸ್.ಎಂ.ಆರ್.ಗ್ರೂಪ್‌ನ ಹಾಜಿ ಎಸ್.ಎಂ. ರಶೀದ್, ಅಲ್ ಅನ್ಸಾರ್ ಪತ್ರಿಕೆಯ ಅಲ್‌ಹಾಜ್ ಇಬ್ರಾಹಿಂ ಬಾವ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಭಾಗವಹಿಸಿದ್ದರು.

ಇದೇ ಸಂದರ್ಭ ಸಹಾಯಕ ಖಾಝಿಯವರನ್ನು ಅಧ್ಯಕ್ಷ ಹಾಜಿ ಕೆ.ಎಸ್. ಮೊಹಿದ್ದೀನ್ ಸಾಹೇಬ್ ಸನ್ಮಾನಿಸಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಲರಪಟ್ಣ, ಅಲ್‌ಹಾಜ್ ಆಝಾದ್ ಮನ್ಸೂರ್ ಅಹ್ಮದ್, ಅಲ್‌ಹಾಜ್ ಮುಹಮ್ಮದ್ ಹನೀಫ್, ಶರೀಫ್ ಸಾಹೇಬ್, ಹಾಜಿ ಸುಲೈಮಾನ್ ಸಾಹೇಬ್, ಹಾಜಿ ಬಶೀರ್ ಸಾಹೇಬ್, ಹಾಜಿ ಎ.ಎನ್. ಇಬ್ರಾಹಿಂ ಅಡ್ಡೂರು, ಹಾಜಿ ಮುಹಮ್ಮದ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಹಾಜಿ ಹಸನಬ್ಬ ಸ್ವಾಗತಿಸಿದರು. ಖತೀಬ್ ಅಬ್ದುಲ್ ರಝಾಕ್ ಮದನಿ ವಂದಿಸಿದರು. ಹಾಜಿ ಮುಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು.

Share: